Monday, September 10, 2007

ಟಾರ್ಚ್ ಹಾಕಿ ಹುಡುಕಿದರೆ ಸಿಗುವರು ನರಸಿಂಹ ಭಂಡಾರಿಯಂಥವರು

ನಾನು ಚಿಕ್ಕವಳಿದ್ದಾಗ ಅಂದುಕೊಳ್ಳುತ್ತಿದ್ದೆ. ನಾವೆಲ್ಲಾ ವಿಜ್ಜಾನಿಗಳಾಗ ಬೇಕಿದ್ದರೆ ವಿಜ್ಜಾನ ವಿಭಾಗದಲ್ಲಿ ಪದವಿಪಡೆಯಬೇಕೆಂದು. ಅದರೆ ಕೊಪ್ಪದ ನರಸಿಂಹ ಭಂಡಾರಿಯವರೊಡನೆ ಮಾತನಾಡಿದ ಮೇಲೆ ತಿಳಿಯಿತು. ಮನಸ್ಸು ಮತ್ತು ಶ್ರಮ ನಮ್ಮ ಜೊತೆಗಿದ್ದರೆ ನಾವೂ ಸಂಶೋಧನೆಗಳನ್ನ ಮಾಡಬಹುದೆಂದು.







ಹೌದು. ನಿಮಗೆ ಈಗಾಗಲೇ ಕೊಪ್ಪದ ನರಸಿಂಹ ಭಂಡಾರಿ ಯಾರೆಂದು ತಿಳಿದಿರಬಹುದು. ರಾಷ್ಟ್ರೀಯ ಪ್ರಶಸ್ತಿಯಿಂದ ಹಿಡಿದು ಮೊನ್ನೆಯ ಎಸ್ಸೆಲ್ ಕರ್ನಾಟಕ ಶ್ರೇಷ್ಠ ಉದ್ಯಮಿ ತನಕ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿದ್ದವರೇ ನರಸಿಂಹ ಭಂಡಾರಿ. ಮಾಧ್ಯಮಗಳಲ್ಲಂತೂ ಬಹುವಾಗಿಯೇ ಮಿಂಚಿದ್ದಾರೆ. ಮಾಧ್ಯಮದವರೂ ಅಪರೂಪಕ್ಕೊಮ್ಮೆ ಇಂಥಹ ಸಾಧಕರನ್ನು ಗುರುತಿಸುತ್ತಾರೆ ಬಿಡಿ!

ತನ್ನ ಧರ್ಮ ಪತ್ನಿ ವಸಂತಿ ಮತ್ತು ಮಕ್ಕಳಾದ ಆದರ್ಶ್, ಆಜಯ್ ಮತ್ತು ಆಶ್ವಿತ್ ಜೊತೆಗೂಡಿ ನೆಮ್ಮದಿಯ ಬದುಕು ಇವರಿಂದು ನಡೆಸಬೇಕಾದರೆ ಪ್ರಮುಖ ಕಾರಣ ಸಾವಿರಾರು ರೈತರ ಕಷ್ಟ, ದುಖ: ವನ್ನು ತಮ್ಮ ಸಂಶೋಧನೆಗಳಿಂದ ದೂರಮಾಡಿದುದರ ಫಲವಾಗಿದೆ.
ಎಲ್ಲರಂತೆ ಆರ್ಥಿಕ ತೊಂದರೆಯಿಂದಾಗಿ ವಿಧ್ಯಾಭ್ಯಾಸ ಅರ್ಧದಲ್ಲೇ (ಎಸ್ ಎಸ್ ಎಲ್ ಸಿ) ನಿಲ್ಲಿಸಬೇಕಾಗಿ ಬಂದರೂ ಮುಂದಿನ ದಿನಗಳಲ್ಲಿ ತಮ್ಮ ಅಮೋಘ ಬುದ್ದಿಶಕ್ತಿಯನ್ನು ಬಳಸಿ ರೈತರಿಗೆ/ಜನಸಾಮಾನ್ಯರಿಗೆ ಉಪಯೋಗವಾಗುವಂಥಹ ಸಂಶೋಧನೆಗಳನ್ನು ಮಾಡುತ್ತಲೇ ಬಂದರು. ಹಸಿ ಅಡಿಕೆ ಸುಳಿಯುವ ಯಂತ್ರ, ಒಣ ಅಡಿಕೆ ಸುಳಿಯುವ ಯಂತ್ರ, ಹೈಡ್ರೊ ಪಂಪ್, ಏಕ/ದ್ವಿ ಚಕ್ರ ವಾಹನಗಳು, ಕಬ್ಬಿಣದ ಏಣಿ, ಡ್ರೈಯರ್...
ಹೀಗೆ ಸಂಶೋಧನೆಗಳನ್ನೂ ಮಾಡುತ್ತಾ ಇತರರ ಕಷ್ಟಗಳಿಗೆ ತನ್ನದೇ ಆದ ರೀತಿಯಲ್ಲಿ ಸ್ಪಂದಿಸುತ್ತಾ ಬಂದಿದ್ದಾರೆ.
ಇವರು ಯಾವುದೇ ಗಿನ್ನಿಸ್ ದಾಖಲೆಗಾಗಿ ಅಥವಾ ದುಡ್ಡಿಗಾಗಿ ಸಂಶೋಧನೆಗಳನ್ನು ಮಾಡಿಲ್ಲ. ತಮ್ಮಂಥಿರುವ ಇತರರ ಕಷ್ಟಗಳನ್ನು ಅರಿತು, ಅವರ ನೋವುಗಳಿಗೆ ಸ್ಪಂದಿಸುವ ಚಿಕ್ಕದಾದ ಸಾಹಸವನ್ನಷ್ಟೇ ಮಾಡಿದ್ದಾರೆ. ಇಂಥಹ ಭಂಡಾರಿಯವರು ಸಾವಿರಾರು ಮಂದಿ ನಮ್ಮೊಡನೆ ಇರುವರು. ಆದರೆ ಅವರೆಲ್ಲಾ ಅಗೋಚರವಾಗಿದ್ದಾರೆ. ಇದಕ್ಕೆಲ್ಲಾ ಮಾಧ್ಯಮಗಳು ಕಾರಣವಾಗಿವೆ.ಮಾಧ್ಯಮದವರು ಅಂಥವರನ್ನು ಗುರುತಿಸಿಲು ವಹಿಸುವ ನಿರ್ಲಕ್ಷವನ್ನು ಇತರೆ ಪ್ರಖ್ಯಾತರನ್ನು ಗುರುತಿಸುವಾಗ ಮಾಡುವುದಿಲ್ಲ... ನರಸಿಂಹ ಭಂಡಾರಿಯವರಂಥವರನ್ನು ಪ್ರೋತ್ಸಾಹಿಸುವತ್ತ ಗಮನ ಹರಿಸಿದರ ನಮಗೆ ನಷ್ಟವಂತೂ ಖಂಡಿತ ಇಲ್ಲ ಅಲ್ವಾ?

5 ನೀವು ಬರೆದದ್ದು:

dinesh said...

Olleya baraha... style chennagide..

Seema said...

ತುಂಬಾ ಚೆನ್ನಾಗಿ ಬರೆದಿದ್ದೀರಿ. ಒಳ್ಳೆಯ information ಕೂಡ ಕೊಟ್ಟಿದ್ದೀರಿ.

sandeep said...

edde undu[:d]...

ಸುಧನ್ವಾ said...

keep it up.
thank u

ಅಸತ್ಯ ಅನ್ವೇಷಿ said...

ಹೌದು.. ಮಾಧ್ಯಮಗಳು ಕೂಡ ಇತ್ತಿತ್ತಲಾಗಿ ನಮ್ಮ ಬೊಗಳೆಯ ಹಾದಿ ಹಿಡೀತಾ ಇವೆ. ರಾಜಕಾರಣಿಗಳು ಹೇಳಿದ ಅಸತ್ಯದ ಮಾತುಗಳೇ ಲೀಡ್ ತಲೆಬರಹ... ಜನರಿಗೆ ಮನರಂಜನೆ ಕೊಡೋದು ಕೂಡಾ ಅದೇ. ಅನಿವಾರ್ಯವೂ ಹೌದೆನ್ನಿ..:)